ಈ ವರ್ಷ ಏಪ್ರಿಲ್ನಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲೆ ವಿಶೇಷ ಸಂಚಲನ ಮೂಡಿಸಿದ ತಿಥಿ ಚಿತ್ರ ಕಲಾವಿದರು ಅಭಿನಯಿಸಿರುವ ಮತ್ತೊಂದು ಚಿತ್ರ ಈಗ ತೆರೆಗೆ ಸಿದ್ಧವಾಗಿದೆ.
ಜೀವಿತಾ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶಿವ ಎಸ್.ಬಿ. ನಿರ್ಮಿಸಿರುವ ತರ್ಲೆ ವಿಲೇಜ್ ಚಿತ್ರವು ಯಾವುದೇ ಸದ್ದು ಗದ್ದಲವಿಲ್ಲದೆ ತೆರೆಗೆ ಸಿದ್ದವಾಗಿದ್ದು, ಈ ವಾರದಲ್ಲಿ ಚಿತ್ರವು ಸೆನ್ಸಾರ್ ಮುಂದೆ ಬರಲಿದೆ.
ಚಿತ್ರಕ್ಕೆ ಸಿದ್ದೇಗೌಡ ಕಥೆ, ರಾಮು ನರಹಳ್ಳಿ ಛಾಯಾಗ್ರಹಣ, ವೀರಸಮರ್ಥ್ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ ಪ್ರಕಾಶ್, ಚಿಕ್ಕಪಾಳ್ಯ ಕಲೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ಕೆ.ಎಂ. ರಘು ಹೊತ್ತಿದ್ದಾರೆ.
ತಾರಾಗಣದಲ್ಲಿ ಗಡ್ಡಪ್ಪ, ಸೆಂಚೂರಿಗೌಡ, ತಮ್ಮಣ್ಣ, ಅಭಿಷೇಕ್, ಹರ್ಷಿತಾ, ಭಾಗ್ಯಶ್ರೀ ಸೋಮು, ರಿಯಲ್ ಕೆಂಚ ರ ಜೊತೆಗೆ ೭೦ ಕಲಾವಿದರು ಅಭಿನಯಿಸಿದ್ದಾರೆ.